Chief Editor
Manohar. R (Manu)
Photo Journalist
chitrataramanu@gmail.com
+91 9845549026
ಮಾತಿನ ಮರುಲೇಪನ ಮುಗಿಸಿದ ವೀರ
Posted date: 06 Tue, Nov 2012 ? 06:24:27 PM
ರಾಮು ಎಂಟರ್‌ಪ್ರೈಸಸ್ ಲಾಂಛನದಡಿಯಲ್ಲಿ ನಿರ್ಮಾಪಕ ರಾಮು ನಿರ್ಮಿಸುತ್ತಿರುವ ೩೨ನೇ ಅದ್ದೂರಿ ಚಿತ್ರ ವೀರ ಯಾವುದೇ ಸದ್ದು ಗದ್ದಲವಿಲ್ಲದೆ ಚಿತ್ರೀಕರಣ ಮುಗಿಸಿದ ಈಗ ಮಾತಿನ ಲೇಪನ ಕಾರ್ಯವನ್ನು ಆಕಾಶ್ ಸ್ಟುಡಿಯೋವಿನಲ್ಲಿ ಸಂಪೂರ್ಣಗೊಳಿಸಿದೆ. 
ಬೆಂಗಳೂರು ಹಾಗೂ ಹಾಂಕಾಂಗ್, ಥೈಲ್ಯಾಂಡ್ ದೇಶಗಳ ಸುತ್ತಮುತ್ತ ಅದ್ದೂರಿಯಾಗಿ ಚಿತ್ರಿತವಾಗಿರುವ ಈ ಚಿತ್ರಕ್ಕೆ ಈಗ ಹಂಸಲೇಖಾ ಸ್ಟುಡಿಯೋವಿನಲ್ಲಿ ಹಂಡಲೇಖಾ ಸಾರಥ್ಯದಲ್ಲಿ ರೀರಿಕಾರ್ಡಿಂಗ್ ಕಾರ್ಯ ಆರಂಭವಾಗಿದೆ. 
ಡಿಸೆಂಬರ್‌ನಲ್ಲಿ ತೆರೆಕಾಣಲಿರುವ ಚಿತ್ರವು ಈ ವರ್ಷದ ಮತ್ತೊಂದು ಅದ್ದೂರಿ ಆಕ್ಷನ್ ಚಿತ್ರವಾಗಲಿದ್ದು, ಎಲ್ಲಾ ವರ್ಗದ ಪ್ರೇಕ್ಷಕರನ್ನು ರಂಜಿಸಲಿದೆ ಎಂದು ನಿರ್ಮಾಪಕ ರಾಮು ತಿಳಿಸಿದ್ದಾರೆ.  
ಚಿತ್ರಕ್ಕೆ ಅನಿಲ್‌ಕುಮಾರ್ (ಶಕ್ತಿ ಖ್ಯಾತಿ) ಸಂಭಾಷಣೆ, ರಾಜೇಶ್ ಕಟ್ಟಾ ಛಾಯಾಗ್ರಹಣ, ಹಂಸಲೇಖಾ ಸಾಹಿತ್ಯ ಸಂಗೀತ, ಇಸ್ಮಾಯಿಲ್ ಕಲೆ, ಇಮ್ರಾನ್ ಸರ್ದಾರಿಯಾ ನೃತ್ಯ, ರವಿವರ್ಮ, ಪಳನಿರಾಜ್ ಸಾಹಸ, ಲಕ್ಷ್ಮಣ್‌ರೆಡ್ಡಿ ಸಂಕಲನವಿದ್ದು, ಚಿತ್ರಕಥೆ ಮತ್ತು ನಿರ್ದೇಶನ ಅಯ್ಯಪ್ಪ.ಪಿ ಶರ್ಮ, 
ತಾರಾಗಣದಲ್ಲಿ ಮಾಲಾಶ್ರೀ, ಕೋಮಲ್, ಅಶಿಷ್ ವಿದ್ಯಾರ್ಥಿ, ರಾಹುಲ್‌ದೇವ್, ಮುಕುಲ್‌ದೇವ್, ಸತ್ಯ (ಹೈದ್ರಾಬಾದ್) ರಾಜು ತಾಳಿಕೋಟೆ, ಸಿ.ಆರ್.ಸಿಂಹ, ಎಂ.ಎನ್. ಲಕ್ಷ್ಮೀದೇವಿ, ಅನಂತವೇಲು, ಮೇಕ್ (ಬಾಲುವುಡ್ ಖ್ಯಾತಿಯ) ಹಾಗೂ ಹಾಲಿವುಡ್‌ನ ಹಲವು ಕಲಾವಿದರು ತಾರಾ ಬಳಗದಲ್ಲಿದ್ದಾರೆ. 
 
Kannada Cinema's Latest Wallpapers
Kannada Cinema's Latest Videos
Kannada Movie/Cinema News - ಮಾತಿನ ಮರುಲೇಪನ ಮುಗಿಸಿದ ವೀರ - Chitratara.com
Copyright 2009 chitratara.com Reproduction is forbidden unless authorized. All rights reserved.